ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಐದು ಪುತ್ಥಳಿ ಅನಾವರಣ ಸಮಾರಂಭ.

ಶಂಕರ್ ನಾಗ್ ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ತಳಿ ಅನಾವರಣ ಸಂಭ್ರಮ ಅದುರಿಯಾಗಿ ಮಡಿವಾಳದಲ್ಲಿ ನಡೆಸಲಾಯಿತು
ದಿನಾಂಕ :15-12-2022
ಸಮಯ 10 :30ಗಂಟೆಗೆ. ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ರಾಮಲಿಂಗ ರೆಡ್ಡಿ ಬಿಟಿಎಂ ವಿಧಾನಸಭಾ ಕ್ಷೇತ್ರ ಶಾಸಕರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಕಾರ್ಪೊರೇಟರ್ ಜಿ ಮಂಜುನಾಥ್, ಮಾಜಿ ಕಾರ್ಪೊರೇಟರ್ ಮುನಿರಾಜು, ಹಿರಿಯ ಮುಖಂಡರು ಮಂಜುನಾಥ್ (ಎಸ್. ಟಿ. ಡಿ ) ಹಾಗೂ
ಅನೇಕ ಸ್ಥಳಿಯರು ಹಿರಿಯ ನಾಗರಿಕರು ಹಾಗೂ ಶಾಲಾ ಮಕ್ಕಳು ಈ ಅಧುರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಂತರ ಸಾರ್ವಜನಿಕರಿಗೆ ಅನ್ನ ವಿತರಣೆ, ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಬೆಂಗಳೂರು ನಗರ ಹೊಸೂರು ರಸ್ತೆ ಅಲ್ಲಿರುವ ಮಡಿವಾಳ ಬಿಬಿಎಂಪಿ ಉದ್ಯಾನವನ ದಲ್ಲಿ ಈ ಐದು ಶಂಕರ್ ನಾಗ್, ರಾಜ್ ಕುಮಾರ್ ,ವಿಷ್ಣುವರ್ಧನ್, ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ತಳಿ ಅನಾವರಣ ಮಾಡಲಾಗಿದೆ. ಅನೇಕ ಕನ್ನಡಿಗರು ಈ ಭಾಗದಲ್ಲಿ ವಾಸ ಮಾಡುತ್ತಿದ್ದು ಈ ಉದ್ಘಾಟನೆಯನ್ನು ಮೆಚ್ಚುಗೆ ಪಡಿಸಿಕೊಂಡರು.
ಕರುನಾಡು ಪಂಚಮೂರ್ತಿ ಅಭಿಮಾನಿಗಳ ಸಂಘ (ರಿ ) ಅಧ್ಯಕ್ಷರಾದ ಸಂಜೀವ್ ಗೌಡ ಮತ್ತು ಅವರ ತಂಡದವರು ಈ ಅದ್ಭುತ ಕಾರ್ಯಕ್ರಮವನ್ನು ಅದುರಿಯಾಗಿ ಹಮ್ಮಿಕೊಂಡಿದ್ದರು.








